ಪುಂಡರಿಕಾಕ್ಷ ಉಪಾಧ್ಯಾಯ ಅವರಿಗೆ `ಕಲ್ಕೂರ ಯಕ್ಷಸಿರಿ ಪುರಸ್ಕಾರ`
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಡಿಸೆ೦ಬರ್ 9 , 2013
|
ಯಕ್ಷಗಾನ ನವರಸಗಳಿಂದ ಸಮ್ಮಿಳಿತ ಕಲೆಯಾಗಿದ್ದು, ಇತರ ಕಲಾ ಪ್ರಕಾರಗಳಿಗಿಂತ ಭಿನ್ನವಾಗಿದೆ ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣ ಅಸ್ರಣ್ಣ ಅಭಿಪ್ರಾಯಪಟ್ಟರು.
ಕಲ್ಕೂರ ಪ್ರತಿಷ್ಠಾನ ವತಿಯಿಂದ, ಕರ್ಣಾಟಕ ಬ್ಯಾಂಕ್ ಸಹಯೋಗದಲ್ಲಿ ನಡೆದ ಕಲ್ಕೂರ ಯಕ್ಷ ಸಿರಿ ಪುರಸ್ಕಾರ ಪ್ರಧಾನ ಸಮಾರಂಭದಲ್ಲಿ ಅವರು ಮಾತನಾಡಿದರು.
|
ಪುಂಡರಿಕಾಕ್ಷ ಉಪಾಧ್ಯಾಯ ಅವರಿಗೆ ''''ಕಲ್ಕೂರ ಯಕ್ಷಸಿರಿ ಪುರಸ್ಕಾರ'' ನೀಡಿ ಗೌರವಿಸಲಾಯಿತು.
|
ಯಕ್ಷಗಾನ ಕಲೆಯಿಂದ ವ್ಯಕ್ತಿಗೆ ಕೀರ್ತಿ, ಗೌರವ, ಸಂಪಾದನೆ, ವ್ಯವಹಾರ ಜ್ಞಾನ, ದೇವರ ಅನುಗ್ರಹ ಎಲ್ಲವೂ ದೊರೆಯುತ್ತದೆ. ಯಕ್ಷಗಾನದಿಂದ ಪುರಾಣದ ಕಥೆಗಳು ಸಾಮಾನ್ಯರಿಗೆ ಸರಳವಾಗಿ ತಿಳಿಯುವಂತಾಗುತ್ತದೆ ಎಂದು ಅವರು ಹೇಳಿದರು.
ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಸ್ತ್ರೀ ಪಾತ್ರಧಾರಿ ಪುಂಡರಿಕಾಕ್ಷ ಉಪಾಧ್ಯಾಯ ಅವರಿಗೆ 'ಕಲ್ಕೂರ ಯಕ್ಷಸಿರಿ ಪುರಸ್ಕಾರ' ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪುಂಡರಿಕಾಕ್ಷ ಉಪಾಧ್ಯಾಯ, ಕೇವಲ ಬಾಯಿಮಾತಿನಲ್ಲಿ ಯಕ್ಷಗಾನ ಉಳಿಸಬೇಕು ಎಂದು ಹೇಳಿದರೆ ಸಾಲದು. ಕಾರ್ಯರೂಪದಲ್ಲಿ ಜಾರಿಗೆ ತರಬೇಕಾದ ಅಗತ್ಯವಿದೆ ಎಂದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಡುಬಿದಿರೆಯ ಬ್ರಹ್ಮಸ್ಥಾನದ ಪಿ.ಜಿ. ನಾರಾಯಣ ರಾವ್, ಭಾರತೀಯ ವಿದ್ಯಾಭವನದ ಜಿ.ಆರ್. ರೈ, ಟಿ. ಕೃಷ್ಣಮೂರ್ತಿ ರಾವ್, ಸಮತಾ ಬಳಗದ ಅಧ್ಯಕ್ಷೆ ಪೂರ್ಣಿಮಾ ರಾವ್ ಪೇಜಾವರ, ಜಿ.ಕೆ. ಭಟ್ ಸೇರಾಜೆ ಮೊದಲಾದವರು ಉಪಸ್ಥಿತರಿದ್ದರು.
ಕಲ್ಕೂರ ಪ್ರತಿಷ್ಠಾನದ ಜರ್ನಾರ್ದನ ಹಂದೆ ಸ್ವಾಗತಿಸಿ, ಅಶ್ವತ್ಥಾಮ ವಂದಿಸಿದರು. ಮಾಧುರಿ ಶ್ರೀ ರಾಮ್ ಕಾರ್ಯಕ್ರಮ ನಿರೂಪಿಸಿದರು.
ಕೃಪೆ : http://www.udayavani.com
|
|
|